ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದ ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಇದರ 4 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವನ್ನು ಕಮತಗಿಯ ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ಕಾರ್ಯ ಕಮತಗಿಯ ಎಲ್ಲಾ ಜನಾಂಗದ ನಾಗರಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು
ಕಾರ್ಯಕ್ರಮದ ಉದ್ಘಾಟನೆಯನ್ನು ಕಮತಗಿ ಪಟ್ಟಣದ ದೇವಾಂಗ ಸಮಾಜದ ಹಿರಿಯರಾದ ಶ್ರೀಕಾಂತ್ ಧೂಪದ ಅವರು ನೆರವೇರಿಸಿದರು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಂಗ ಸಮಾಜ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ಪಾಂಡುರಂಗ ಹೋಟಿಯವರು ವಹಿಸಿದ್ದರು
ನೇಕಾರಿಕೆ ಮತ್ತು ರೈತ ವೃತ್ತಿ ಹೊಂದಿರುವ ಕಮತಗಿ ಪಟ್ಟಣದಲ್ಲಿ ಕಣ್ಣಿನ ತಪಾಸನೆ ಮತ್ತು ರಕ್ತದಾನ ಶಿಬಿರ ಶ್ಲಾಘನೀಯ ಎಂದು ಹೇಳಿದರು
ಕಣ್ಣಿನ ಉಚಿತ ತಪಾಸಣೆಯಲ್ಲಿ ಬಾಗಲಕೋಟೆಗೆ ಐ ಬಡ್ಡಿ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ ಶ್ರೀಮತಿ ಶಿಲ್ಪ ಉಮರಾಣಿ ಅವರು ಕಣ್ಣಿನ ತಪಾಸನೆಯನ್ನು ಮಾಡಿದರು ಸುಮಾರು 150 ಜನರಿಗೆ ಕಣ್ಣಿನ ತಪಾಸಣೆ ಮಾಡಲಾಯಿತು
ಬಾಗಲಕೋಟೆಯ ಕೆರೂಡಿ ಬ್ಲಡ್ ಸೆಂಟರ್ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 20ಕ್ಕೂ ಹೆಚ್ಪಾಚು ಜನ ರಕ್ತದಾನ ಮಾಡಿದರು
ಈ ಕಾರ್ಯಕ್ರಮದಲ್ಲಿ ಹಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯ ಅಧ್ಯಕ್ಷರಾದ ವೀರಭದ್ರಪ್ಪ ಮಾರಾಳ ಕಾರ್ಯದರ್ಶಿ ಶಂಕರ್ ವನಕಿ ಉಪಾಧ್ಯಕ್ಷ ಜಂಪಣ್ಣ ಶಿರಗುಂಪಿ ಸಂಚಾಲಕ ನಾಗಪ್ಪ ಅಚನೂರ ಸದಸ್ಯರಾದ ಕಾಶಿನಾಥ್ ತಂಬೂರಿ ಸುನಿಲ್ ಕುಮಚಗಿ
ಶ್ರೀ ಬನಶಂಕರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿದ್ಯಾಶ್ರೀ ವಣಕಿ ಸೇರಿದಂತೆ ಸಂಸ್ಥೆಯ ಎಲ್ಲ ಪದಾಧಿಕಾರಿಗಳು
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ ಖಡಕ್ ಕನ್ನಡ Digital ಡೆಸ್ಕ್ ಬಾಗಲಕೋಟೆ