*ಪೋಲೀಸ್ ಪ್ರಕಟಣೆ*
ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಕಳ್ಳರ ಗುಂಪೊಂದು ಪೊಲೀಸ್ ಎಂದು ಸುಳ್ಳು ಹೇಳಿಕೊಂಡು ಸಾರ್ವಜನಿಕರನ್ನು ರಾತ್ರಿ ವೇಳೆಯಲ್ಲಿ ತಡೆದು ಕಳ್ಳರು ಬಂದಿದ್ದಾರೆಂದು ಹೆದರಿಸಿ, ಹಣ, ಚಿನ್ನಾಭರಣಗಳನ್ನು ನಮಗೆ ಕೊಡಿ ನಂತರ ಕೊಡುತ್ತೇವೆಂದು ನಂಬಿಸಿ ಅವುಗಳನ್ನು ದೋಚುವ ಗುಂಪೊಂದು ಸಕ್ರಿಯವಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಹಾಗೂ ಈ ಕುರಿತು ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಅಥವಾ ಇಂತಹ ವಂಚನೆಗೊಳಗಾದರೆ ಕೂಡಲೇ
ತುರ್ತು ಸಹಾಯವಾಣಿ ಸಂಖ್ಯೆ 112 ಅಥವಾ ಸಮೀಪದ ಪೊಲೀಸ್ ಠಾಣೆಗೆ ಅಥವಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ:08354-235079, 9480803900ಕ್ಕೆ ಕರೆ ಮಾಡಲು ಕೋರಲಾಗಿದೆ.
ವರದಿ - ರಾಜು ಸುಂಕದ ಬಾಗಲಕೋಟೆ