ಗುಡೂರ ಎಸ್ ಸಿ :-ಶ್ರೀ ಜಗದಂಬಾದೇವಿ ನೂತನ ಕಲ್ಯಾಣ ಮಂಟಪದಲ್ಲಿ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಸರಕಾರಿ ಕನ್ನಡ ಹಿರಿಯ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಮತ್ತು ಎಮ್ ಜಿ ವಿ ಸಿ ಶಾಲೆ ಹಾಗೂ ಶ್ರೀ ಅ ಕೃ ಪೋ ಶ್ರೀ ಖೋಡೆ ಈಶ್ವರಸಾ ಪ್ರೌಢಶಾಲೆಯ ೨೦೦೧-೨೦೦೨ ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಸಹೋದರ ಮತ್ತು ಸಹೋದರಿಯ ನಡುವಿನ ಪ್ರೀತಿ ಮತ್ತು ರಕ್ಷಣೆಯ ಬಂಧವನ್ನು ಸಂಕೇತಿಸುವ ರಾಖಿ ಹಬ್ಬವನ್ನು ಸ್ನೇಹಿತೆಯರು ತಮ್ಮ ಸ್ನೇಹಿತರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಬಸವರಾಜ ಅಂಗಡಿ., ಗುರುರಾಜ ಚಿನಿವಾಲರ., ಸಿದ್ದು ಗಂಜಿಹಾಳ., ಶೀಲಾ ಮೆಹರವಾಡೆ., ಚಾಂಗುನಾ ಮೆಹರವಾಡೆ., ಮಂಜುಳಾ ಬಾಗಾ., ಅಂಭಿಕಾ ದಲಭಂಜನ ಸೇರಿದಂತೆ ಇತರರಿದ್ದರು.
ನಮ್ಮ ಪ್ರತಿನಿಧಿ - ಶಂಕರ್ ವನಕಿ ಕಮತಗಿ