ಬಾದಾಮಿ:ಹೊಸದಾಗಿ ನಮ್ಮ ಬಾದಾಮಿ ಘಟಕಕ್ಕೆ ನಾಲ್ಕು ಬಸ್ ಗಳು ಬಂದಿದ್ದು, ಪ್ರಯಾಣಿಕರು, ಶಾಲಾ ಮಕ್ಕಳು, ವೃದ್ದರ ಸುರಕ್ಷಿತೆಯೊಂದಿಗೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮನವಿ ಮಾಡಿದರು. ಅವರು ಸೋಮವಾರ ನಗರದ ಬಸ್ ನಿಲ್ದಾಣದಲ್ಲಿ ನಾಲ್ಕು ಬಸ್ ಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು. ಸರಕಾರ ಸಾರಿಗೆ ಇಲಾಖೆಯು ಮಹಿಳೆಯರು, ಶಾಲಾ ಮಕ್ಕಳು ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ಗಳನ್ನು ನೀಡಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗರಡ್ಡಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕ ಎ.ಎ.ಕೋರಿ, ಪುರಸಭೆ ಸದಸ್ಯ ಶಂಕರ ಕನಕಗಿರಿ, ಮುಖಂಡರಾದ ಈರಣ್ಣ ಕರಿಗೌಡರ, ಮುತ್ತು ಬಾಗಲೆ, ಶ್ರೀಕಾಂತ ಗೌಡರ, ಅಶೋಕ ಕೋಟನಕರ, ಶಶಿ ಗೌಡರ ಸೇರಿದಂತೆ ಘಟಕದ ಚಾಲಕರು, ನಿರ್ವಾಹಕರು, ಸಿಬ್ಬಂದಿಗಳು ಹಾಜರಿದ್ದರು.
ವರದಿ - ಸಂತೋಷ ಕಲಾಲಬಂಡಿ ಗುಳೇದಗುಡ್ಡ