ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ (ಬಿಇಸಿ)ಐಇಇಇ ಉತ್ತರ ಕರ್ನಾಟಕ ಶಾಖೆ ಹಾಗೂ ಐಇಇಇ ಬೆಂಗಳೂರು ವಿಭಾಗ ಜಂಟಿಯಾಗಿ ಮಾಹಿತಿ ಶಕ್ತಿಯ ಪ್ರಭಾವ ಎಂಬ ಧ್ಯೇಯದೊಂದಿಗೆ ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಐಇಇಇ ಅಂತರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದೆನು.
ಬೆಂಗಳೂರಿನ ಕುಶಾಗ್ರಮತಿ ಅನಾಲಿಟಿಕ್ಸ್ ಪ್ರೈ. ಲಿಮಿಟೆಡ್,ನ ಸ್ಟಾರ್ಟ್ಅಪ್ ಮೆಂಟರ್, ಸಲಹೆಗಾರರ ಸಿಇಒ & ಎಂ ಡಿ,
ಡಾ. ಅನಂತ ಕೊಪ್ಪರ್ ಅವರು ಸಮ್ಮೇಳನವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮತ್ತು ಡಾ. ಅಲೋಕನಾಥ್ ಡಿ, ಸಂಸ್ಥಾಪಕ ಮತ್ತು ಸಿಇಒ, ಟೆಕ್ಕ್ರಾಫ್ಟರ್, ಮಾಜಿ ಸಿಟಿಒ ಮತ್ತು ಸಿವಿಪಿ, ಸ್ಯಾಮ್ಸಂಗ್ ಬೆಂಗಳೂರು, ಡಾ. ಟಿ. ಶ್ರೀನಿವಾಸ್, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಫೋಟೊನಿಕ್ಸ್ ವಿಭಾಗ, ಐಐಎಸ್ಸಿ ಬೆಂಗಳೂರು, ಶ್ರೀ ಪುನೀತ್ ಕುಮಾರ್ ಮಿಶ್ರಾ, ಮುಖ್ಯಸ್ಥರು, ಎಸ್ಎಸಿ, ಯುಆರ್ಆರ್ಎಸ್ಸಿ, ಬೆಂಗಳೂರು, ಡಾ. ಚಂದ್ರಕಾಂತ ಕುಮಾರ್, ವಿಜ್ಞಾನಿಗಳು ಇಸ್ರೋ, ಬೆಂಗಳೂರು, ಡಾ. ಸುರೇಶ ಜಂಗಮಶೆಟ್ಟಿ, ಕುಲಪತಿಗಳು ಹಾವೇರಿ ವಿಶ್ವವಿದ್ಯಾಲಯ ಇವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಗೌ.ಕಾರ್ಯದರ್ಶಿಗಳಾದ ಮಹೇಶ ಎನ್.ಅಥಣಿ, ಡಾ.ಆರ್.ಎನ್.ಹೆರ್ಕಲ್, ಪ್ರಾಚಾರ್ಯರಾದ ಡಾ.ಬಿ.ಆರ್.ಹಿರೇಮಠ ಉಪಸ್ಥಿತರಿದ್ದರು.
ವರದಿ ರಾಜೀವ್ ಸುಂಕದ್ ಬಾಗಲಕೋಟೆ