ಪೌರ ಕಾರ್ಮಿಕರ ಸೇವೆ ಅಮೂಲ್ಯವಾದದ್ದು :- ರಮೇಶ ಜಮಖಂಡಿ

 


ಜನಸಾಮಾನ್ಯರ ದಿನನಿತ್ಯದ ಕಾರ್ಯಗಳಿಗೆ ನೀರು ಸರಬರಾಜು ಹಾಗೂ ಸಹಾಯಕರು ವಾಲ್ ಮ್ಯಾನ್ ಗಳು ವಿದ್ಯುತ್ ವಿಭಾಗದ ನೌಕರರು ಮತ್ತು ಬೆಳಿಗ್ಗೆ ಪ್ರಮುಖ ಬೀದಿಗಳನ್ನು ಶುಚಿ ಗೊಳಿಸುವ ಪೌರ ಕಾರ್ಮಿಕರ ಸೇವೆ ಅತಿ ಅಮೂಲ್ಯವಾದದ್ದು ಇವತ್ತು ಇಡೀ ರಾಜ್ಯ ದೇಶ ಎಲ್ಲಾ ಪಟ್ಟಣಗಳು ನಗರಗಳು ಸ್ವಚ್ಛತೆಯಿಂದ ವಿದ್ಯುತ್ ದೀಪಗಳಿಂದ ನೀರು ಸರಬರಾಜಿನಿಂದ ಹಿಡಿದು ಜನರ ಸುಖ ಜೀವನ ಸಾಗಿಸುವಂತೆ ಹಗಲಿರುಳು ಮಳೆ ಬಿಸಿಲು ಎನ್ನದೆ ನೋಡಿಕೊಳ್ಳುವವರು ಪೌರಕಾರ್ಮಿಕರು ಎಂದು ಕಮತಗಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ರಮೇಶ್ ಜಮಖಂಡಿ ಅಭಿಪ್ರಾಯಪಟ್ಟರು


ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಪೌರಕಾರ್ಮಿಕರಿಗೆ ಸನ್ಮಾನಿಸುವುದರ ಮೂಲಕ ವಿಶೇಷವಾಗಿ ಪೌರಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.



ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ದೇವಿಪ್ರಸಾದ ನಿಂಬಲಗುಂದಿ ಮುಖ್ಯಾಧಿಕಾರಿ ಎಫ್ ಎನ್ ಹುಲ್ಲಿಕೆರಿ ಆಡಳಿತಾಧಿಕಾರಿ ರಮೇಶ್ ಪದಕಿ ಸೇರಿದಂತೆ ಪಟ್ಟಣ ಪಂಚಾಯತ ಸದಸ್ಯರು ಸಿಬ್ಬಂದಿಗಳು ಹಾಜರಿದ್ದರು


ವರದಿ - ಶಂಕರ್ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!