ಕರ್ನಾಟಕ ರಾಜ್ಯ ದೇವಾಂಗ ಸಂಘ ಬೆಂಗಳೂರು ದೇವಾಂಗ ಸಮಾಜ ಮಂಗಳೂರು ಶ್ರೀ ಭಗವತಿ ಮಹಿಳಾ ವೇದಿಕೆ ಯುವ ದೇವಾಂಗ ವೇದಿಕೆ ಮಂಗಳೂರು ಶ್ರೀ ಕುಕ್ಕಾಡಿ ಕ್ಷೇತ್ರ ಸಮಿತಿ ಕರ್ನಾಟಕ ರಾಜ್ಯ ದೇವಾಂಗ ಸಂಘ ಬೆಂಗಳೂರು ದೇವಾಂಗ ಸಮಾಜ ಮಂಗಳೂರು ಶ್ರೀಮಧು ರಾಮಲಿಂಗ ಚೌಡೇಶ್ವರಿ ದೇವಸ್ಥಾನ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ -2024 ಮತ್ತು ವಿದ್ಯಾನಿಧಿ ದಾನಿಗಳ ಹಾಗೂ ಗಣ್ಯರ ಸನ್ಮಾನ ಸಮಾರಂಭ ಹಾಗೂ ತುಳುನಾಡ ವೈಭವ ಸಮಾರಂಭ ಅದ್ಧೂರಿಯಾಗಿ ನಡೆಯಿತು
ಕಾರ್ಯಕ್ರಮದಲ್ಲಿ ಹಂಪಿ ಹೇಮಕೂಟ ಗಾಯತ್ರಿ ಪೀಠದ ದೇವಾಂಗ ಜಗ್ದುರುಗಳಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ಹಾಗೂ ಶ್ರೀ ಶ್ರೀ ಶ್ರೀ ಡಾ ಧರ್ಮಪಾಲನಾಥ ಸ್ವಾಮೀಜಿ
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ಮಂಗಳೂರು ಅವರು ದಿವ್ಯ ಸಾನಿಧ್ಯ ವಹಿಸಿದ್ದರು ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯರಾದ ಶ್ರೀ ಕೆ.ನಾರಾಯಣ ಅವರು ವಹಿಸಿದ್ದರು
ಕರ್ನಾಟಕ ರಾಜ್ಯ ದೇವಾಂಗ ಸಮಾಜದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ಅವರು ಸನ್ಮಾನಿಸಿದರು.
ಘನ ಉಪಸ್ಥಿತಿಯನ್ನು ವಿಧಾನಪರಿಷತ್ ಸದಸ್ಯರಾದ ಶ್ರೀ ಎಂ ಡಿ ಲಕ್ಷ್ಮೀನಾರಾಯಣ ವಹಿಸಿದ್ದರು
ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ. ಕಲಬುರ್ಗಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು ಶ್ರೀ ಕೀರ್ತಿ ಗಣೇಶ್ ಆಶಯ ನುಡಿಗಳನ್ನಾಡಿದರು.
ಡಾ. ಜಿ. ರಮೇಶ್ ನಿವೃತ್ತ ಡಿ.ಐ.ಜಿ ಹಾಗೂ ಅಧ್ಯಕ್ಷರು ದೇವಾಂಗ ಸಂಘ,ಬೆಂಗಳೂರು ಶ್ರೀ ಪಿ.ಆರ್.ಗಿರಿಯಪ್ಪ ಅಧ್ಯಕ್ಷರು,ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನ ಟ್ರಸ್ಟ್, ಬೆಂಗಳೂರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು
ಶ್ರೀಮತಿ ರಶ್ಮಿ ಎಸ್. ಆರ್ ಅಸಿಸ್ಟೆಂಟ್ ಕಮಿಷನರ್, ಕುಂದಾಪುರ ಸಬ್ ಡಿವಿಷನ್, ಉಡುಪಿ ಜಿಲ್ಲೆ. ಶ್ರೀಮತಿ ಪ್ರತಿಭಾ ಅರ್.ತಹಸೀಲ್ದಾರರು,ಕಾಪು ತಾಲೂಕು,ಉಡುಪಿ ಜಿಲ್ಲೆ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು
ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘದ ಅಧ್ಯಕ್ಷರಾದ .ಕೆ ಜಿ.ಭಾಸ್ಕರಯ್ಯ ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಯ ದೇವಾಂಗ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘದ ಸದಸ್ಯರು ಪಾಲ್ಗೊಂಡಿದ್ದರು
ವರದಿ - ಶಂಕರ್ ವನಕಿ ಕಮತಗಿ ಬಾಗಲಕೋಟೆ