ಅಭಿಮಾನಿ ಬೆಂಕಿ ಹಚ್ಚಿಕೊಳ್ಳಲು ಯತ್ನ

 









ಸಿ ಎಂ ಸಿದ್ಧರಾಮಯ್ಯ ಅವರು ಅಭಿಮಾನಿಯೊಬ್ಬ ಬೆಂಕಿ‌ಹೆಚ್ಚಿಕೊಳ್ಳಲು ಯತ್ನಿಸಿದ ಘಟನೆ ಬಾಗಲಕೋಟೆಯ ನವನಗರದ ಜಿಲ್ಲಾಡಳಿತ ಭವನದ ಎದುರು ನಡೆದಿದೆ.

ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್'ಗೆ ಅನುನತಿ ನೀಡಿದ್ದನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು, ಹಾಗೂ ಸಿದ್ಧರಾಮಯ್ಯನವರ ಅಭಿಮಾನಿಗಳು ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆ ವೇಳೆ ಘಟನೆ ಜರುಗಿದೆ.


ನಗರದ ಜಿಲ್ಲಾಡಳಿತದ ಸಮೀಪ‌ ಪ್ರತಿಭಟನಾಕಾರರು ಟಯರ್'ಗೆ ಬೆಂಕಿ ಹಚ್ಚಿ,ಕೇಂದ್ರ ನಾಯಕರ ಭಾವಚಿತ್ರಗಳಿಗೆ ಚಪ್ಪಲಿ ಏಟು ನೀಡಿ, ಬೆಂಕಿ ಹಚ್ಚಿ ಪ್ರತಿಭಟಿಸುತ್ತಿದ್ದ ವೇಳೆ ಅಲ್ಲಿಯೇ ಇದ್ದ ಸಿದ್ಧರಾಮಯ್ಯನವರ ಅಭಿಮಾನಿ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾನೆ 

ಕೂಡಲೇ ಸ್ಥಳದಲ್ಲಿದ್ದವರು ತಡೆದು ,ಪೊಲೀಸರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.ಗಾಯಗೊಂಡ ವ್ಯಕ್ತಿಯನ್ನು ‌ಗುಳೇದಗುಡ್ಡ ಸಮೀಪದ ನಾಗರಾಳ ಎಸ್.ಪಿ.ಗ್ರಾಮದ ನಿವಾಸಿ ದ್ಯಾವಪ್ಪ ಮಾಗಿ ಎಂದು ಗುರ್ತಿಸಲಾಗಿದೆ.ವ್ಯಕ್ತಿ ಕೈ,ಮೈ,ಕುತ್ತಿಗೆ,ಎದೆ,ಬೆನ್ನು ಸೇರಿ ಹಲವೆಡೆ ಗಾಯಗಳಾಗಿದ್ದು, ವ್ಯಕ್ತಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ 



ನಮ್ಮ ಪ್ರತಿನಿಧಿ - ರಾಜೀವ್ ಸುಂಕದ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!