ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಹಾಗೂ ಬಾಗಲಕೋಟ ಸಮಸ್ತ ಹಿಂದೂ ಸಮಾಜದಿಂದ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವ ಕುರಿತು ಜಿಲ್ಲಾಡಳಿತ ಭವನದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ರಾಜ್ಯ ಸಭೆಯ ಸಂಸದ ನಾರಾಯಣಸಾ ಭಾಂಡೆಗೆ ಅವರ ನೇತೃತ್ವದಲ್ಲಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಾರುತಿರಾವ ಶಿಂಧೆ, ಗುಂಡು ಶಿಂಧೆ, ಕುಮಾರಸ್ವಾಮಿ ಹೀರೆಮಠ, ಸುರೇಶ ಮಾಗಿ, ಶಾಂತಗೌಡ ಪಾಟೀಲ, ಅಶೋಕ ಲಿಂಬಾವಳಿ, ರಾಜು ನಾಯ್ಕರ, ನಗರಸಭೆಯ ಸದಸ್ಯರು ಹಾಗೂ ಸಮಸ್ತ ಹಿಂದೂ ಭಾಂದವರು ಉಪಸ್ಥಿತರಿದ್ದರು.
ನಮ್ಮ ಪ್ರತಿನಿಧಿ ರಾಜೀವ್ ಸುಂಕದ