ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿ ಆಗಿರುವುದರಿಂದ ಇಂದು ಆಗಸ್ಟ್ 21 ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರಕ್ಕೆ ಆಗಮಿಸಲಿದ್ದಾರೆ
ಮಧ್ಯಾಹ್ನ 1 ಗಂಟೆಗೆ ಗಂಗಾ ಪೂಜೆ ನೆರವೇರಿಸಿ ಕೃಷ್ಣಗೆ ಬಾಗಿನ ಅರ್ಪಿಸಲಿದ್ದಾರೆ
ಇಂದು ಬೆಳಿಗ್ಗೆ ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಕೊಪ್ಪಳ ಜಿಲ್ಲೆಯ ಗಿಣಿಗೇರ ಏರಸ್ಟ್ರಿಪಗೆ ಬಂದಿಳಿಯಲಿರುವ ಅವರು ಅಲ್ಲಿಂದ ರಸ್ತೆಯ ಮೂಲಕ ಮಧ್ಯಾಹ್ನ 12:30ಕ್ಕೆ ಆಲಮಟ್ಟಿಗೆ ಆಗಮಿಸಿ ಕೃಷ್ಣ ನದಿಗೆ ಬಾಗಿನ ಅರ್ಪಿಸಲಿದ್ದಾರೆ ಎಂದು ಕೆಬಿಜೆಎನ್ ಎಲ್ ಎಂಡಿ ಕೆ ಪಿ ಮೋಹನರಾಜ್ ತಿಳಿಸಿದ್ದಾರೆ
ಸಿಎಂ ಆಗಮನದ ಹಿನ್ನೆಲೆಯಲ್ಲಿ ಎಂಡಿ ಮೋಹನರಾಜ್ ಮತ್ತು ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಜಂಟಿಯಾಗಿ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರದ ಸುತ್ತ ಮುತ್ತ ಭದ್ರತೆ ಪರಿಶೀಲಸಿ ಬಾಗಿನ ಅರ್ಪಣೆ ಸ್ಥಳ ಸಿದ್ದತೆ ಪರೀಶೀಲಿಸಿದರು.
ವರದಿ ಶಂಕರ್ ವನಕಿ ಕಮತಗಿ