ಬೆಳ್ಳಂ ಬೆಳಿಗ್ಗೆ ಅಪಘಾತ ಓರ್ವ ಸಾ**

 


ಬಾಗಲಕೋಟೆಯಿಂದ ನಮ್ಮ ಪ್ರತಿನಿಧಿ ರಾಜೀವ್ ಸುಂಕದ 


ಬಾಗಲಕೋಟೆಯ ಹೊರ ವಲಯದಲ್ಲಿ ಇಂದು ನಸುಕಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟ ಘಟನೆ ಬಾಗಲಕೋಟೆ ವಿದ್ಯಾಗಿರಿ ರಸ್ತೆಯ ಹವೇಲಿ ಕ್ರಾಸ್ ಬಳಿ ಬೆಳಗ್ಗೆ ನಡೆದಿದೆ.


ವಿಶಾಲ ಸರಗಣಾಚಾರಿ (27) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಕಾರಿನಲ್ಲಿದ್ದ ಇನ್ನಿಬ್ಬರು ವ್ಯಕ್ತಿಗಳಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.


ಬಾಗಲಕೋಟೆ. ವಿದ್ಯಾಗಿರಿ ರಸ್ತೆಯಲ್ಲಿರುವ ಹವೇಲಿ ಕ್ರಾಸ್ ಸಮೀಪ ಈ ಘಟನೆ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಕಾರು ಪಲ್ಪಿ ಹೊಡೆದ ಪರಿಣಾಮ ವಿಶಾಲ ಎಂಬ ವ್ಯಕ್ತಿಯ ತಲೆಗೆ ತೀವ್ರ ಸ್ವರೂಪ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆಂದು ಹೇಳಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!