ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬಾಗಲಕೋಟೆ ಮತಕ್ಷೇತ್ರದ ರಾಮಥಾಳ ಗ್ರಾಮದಲ್ಲಿ ನಡೆದ ವಿಧಾನ ಪರಿಷತ್ ಶಾಸಕರಾದ ಶ್ರೀ P H ಪೂಜಾರ ರಿಂದ ಬಿಜೆಪಿ ಸದಸ್ಯತ್ವ ಅಭಿಯಾನ ಜರುಗಿತು
ಸಾಯಂಕಾಲ 6 ಕ್ಕೆ ರಾಮಥಾಳ ಗ್ರಾಮದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಪಾಂಡುರಂಗ ದೇವಸ್ಥಾನದಲ್ಲಿ ವಿಧಾನಪರಿಷತ್ ಶಾಸಕರಾದ ಸನ್ಮಾನ್ಯ ಶ್ರೀ ಪಿಎಚ್ ಪೂಜಾರ್ ಬಿಜೆಪಿಯ ಸ್ಟಿಕರ್ ಹಾಗೂ ಮಾಹಿತಿ ಪುಸ್ತಕ ಪ್ರದರ್ಶಿಸಿ ಚಾಲನೆ ನೀಡಿದರು ಸದಸ್ಯತ್ವ ಕುರಿತು ಮಾಹಿತಿ ನೀಡಿದರು.
ರಾಮಥಾಳ ಗ್ರಾಮದ ಮುಖಂಡರಾದ ಲಕ್ಷ್ಮಣ ಗೌಡರ, ವಾಯ್ ಎಚ್.ಯರನ್ನಕೇರಿ, ಮಲ್ಲಕಪ್ಪ ಸೋಳಿಕೇರಿ,ಯಮ್ಮನಪ್ಪ ಕೂಪ್ಪದ, ಸಂತಾನಪ್ಪ ಗೌಡರ್, ಶಿವಾನಂದ ಬಂಟನೂರು, ಬಸವನಗೌಡ ಪಾಟೀಲ್ , ಹಾಗೂ ಬಿಜೆಪಿ ಮುಖಂಡರಾದ ಶಂಭುಗೌಡ ಪಾಟೀಲ, ಡಾಕ್ಟರ್ ಶೇಖರ್ ಮಾನೆ ,ಸಂಗಣ್ಣಗೌಡ ಗೌಡರ, ಪ್ರಕಾಶ ಗುಳೇದಗುಡ್ಡ, ವಿರೂಪಾಕ್ಷಿ ಅಮ್ರುತಕರ, ಕುಮಾರ ಗಿರಿಜಾ,ರಾಜು ಚಿತ್ತವಾಡಗಿ, ಯಮನಪ್ಪ ಮಡ್ಡಿಕೇರಿ,ಹಾಗೂ ಊರಿನ ಹಿರಿಯರು ಯುವಕ ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು
ಬಿಜೆಪಿ ಸದಸ್ಯತ್ವದ ನೊಂದಾಯಿಸುವ ಮಾಹಿತಿ ನೀಡಿ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಕಾರ್ಯಕರ್ತರ ಮುಖಂಡರ ಸದಸ್ಯತ್ವವನ್ನು ರಾತ್ರಿ 8 ಗಂಟೆಯ ತನಕ 80 ಕ್ಕೂ ಅಧಿಕ ಸಂಖ್ಯೆ ಸದಸ್ಯತ್ವವನ್ನು ಮಾಡಿ ಊರಿನಲ್ಲಿ ಸದಸ್ಯತ್ವದ ಮಾಡಬೇಕೆಂದು ತಿಳಿಸಿದರು
ಜನರು ಬಿಜೆಪಿ ರಾಷ್ಟ್ರ ಹಾಗೂ ರಾಜ್ಯದ ಹಿತಕ್ಕಾಗಿ ಬಿಜೆಪಿ ಸದಸ್ಯತ್ವವನ್ನು ನೋಂದಾಯಿಸಿ ನರೇಂದ್ರ ಮೋದಿ ಅವರ ಆಡಳಿತ ವೈಕರಿಯನ್ನು ಕೊಂಡಾಡಿದರು
ಕೇಂದ್ರ ಸರಕಾರದ ರೈತರ ಹಿತಗೋಸ್ಕರ ಸಾಕಷ್ಟು ಕೆಲಸ ಮಾಡುತ್ತಿದ್ದು ದೇಶದ ಭದ್ರತೆಗೆ ಕಟ್ಟಿಬದ್ಧ ರಾಗಿ ನಿಂತಂತ ಸೈನಿಕರನ್ನು ಶಕ್ತಿ ತುಂಬುತ್ತಿರುವ ನರೇಂದ್ರ ಮೋದಿ ರಾಜ್ಯ ಸರ್ಕಾರದ ಗ್ಯಾರೆಂಟಿಗಳಿಂದ ಅಭಿವೃದ್ಧಿ ಶೂನ್ಯವಾಗಿದ್ದು, ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ಜನರ ಅನುದಾನ ಕತ್ತರಿ ಹಾಕಿದ್ದು ಭ್ರಷ್ಟಾಚಾರದಲ್ಲಿ ಈ ಸರ್ಕಾರ ಮುಳುಗಿದೆ
ಬಲಿಷ್ಠ ರಾಷ್ಟ್ರ ಕಟ್ಟಲು ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವ ಶಕ್ತಿ ತುಂಬಲು ಬಿಜೆಪಿ ಸದಸ್ಯತ್ವವನ್ನು ನೋಂದಾಯಿಸಿ ಎಂದು ಪಿಎಚ್ ಪೂಜಾರ್ ಹೇಳಿದರು .
ವರದಿ ಶಂಕರ ವನಕಿ ಕಮತಗಿ