ಬಾಗಲಕೋಟ ಜಿಲ್ಲಾಡಳಿತ ಭವನದ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಹಾಗೂ ಕಾರ್ಮಿಕ ಸೌಲಭ್ಯಗಳ ಮಾಹಿತಿ ಕುರಿತು ಜಿಲ್ಲಾ ಕಾರ್ಮಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ
ನೇಕಾರರು ಸರ್ಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು
ಇದೆ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಆದಷ್ಟು ಬೇಗನೆ ಜಿಲ್ಲೆಯ ವೃತ್ತಿಪರ ನೇಕಾರರ ಸಾಲ, ಮತ್ತು ಬಡ್ಡಿ ತುಂಬಲು ಬ್ಯಾಂಕುಗಳು ಹಾಗೂ ವಿವಿಧ ಹಣಕಾಸು ಸಂಸ್ಥೆಗಳಿಂದ ಒತ್ತಡ ಹಾಕತ್ತಿವೆ ಬಡ ದಿನಗೂಲಿ ನೇಕಾರರು ಒತ್ತಡ ತಾಳಲಾರದೆ ತೊಂದರೆ ಅನುಭವಿಸುತ್ತಿದ್ದಾರೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮತ್ತು
ಇನ್ನೂ ಅನೇಕ ಬಗೆಯ ನೇಕಾರರ ಸಮಸ್ಯಗಳನ್ನು ಸರ್ಕಾರದ ಗಮನ ಸೆಳೆಯಲು ಮಾನ್ಯ ಜವಳಿ ಸಚಿವರಾದ ಶ್ರೀ ಶಿವಾನಂದ ಪಾಟೀಲ ಅವರಿಗೆ ಸಭೆ ಆಯೋಜಿಸಲು ಒತ್ತಾಯಿಸಲಾಗಿದೆ
ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಖಡಕ್ ಕನ್ನಡ ನ್ಯೂಸನೊಂದಿಗೆ ಮಾಹಿತಿ ಹಂಚಿಕೊಂಡರು
ವರದಿ - ರಾಜೀವ್ ಸುಂಕದ ಬಾಗಲಕೋಟೆ