ರಾಂಪೂರಿನಲ್ಲಿ ಬಿಜೆಪಿ ಮಹಾಸದಸ್ಯತಾ ಅಭಿಯಾನಕ್ಕೆ ಚಾಲನೆ
ಇಂದು ರಾಂಪೂರ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿಯ ಗ್ರಾಮೀಣ ಮಂಡಲದಿಂದ ಹಮ್ಮಿಕೊಂಡ ಮಹಾಸದಸ್ಯತಾ ಅಭಿಯಾನಕ್ಕೆ
ಸಂಸದರಾದ ಪಿ.ಸಿ.ಗದ್ದಿಗೌಡರ ಮತ್ತು ಮಾಜಿ ಶಾಸಕ ಡಾ ವೀರಣ್ಣ ಚರಂತಿಮಠ ಮಿಸ್ಡ್ ಕಾಲ್ ಮಾಡಿ ಬಿಜೆಪಿ ಸದಸ್ಯರಾಗಿ ಎಂಬ ನಾಮಫಲಕ ಅನಾವರಣಗೊಳಿಸಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಎಲ್ಲ ಬಿಜೆಪಿ ಮುಖಂಡರು ಸಂಸದ ಪಿ ಸಿ ಗದ್ದಿಗೌಡರ ಅವರನ್ನು ಸನ್ಮಾನಿಸಿ ಗೌರವಿಸಿದರು
ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೋಣ್ಣೂರ, ರಾಜು ಮುದೇನೂರ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಸೋಮಸಿಂಗ್ ಲಮಾಣಿ, ಸಿದ್ದು ಲೋಕಾಪುರ,ಗುಳಪ್ಪ ದೋಣಿ,ದೀಲಿಪಕುಮಾರ ಚವ್ಹಾಣ, ಅಮ್ಯತೆಗೌಡರ, ಕರಿಯಪ್ಪ ಕಟ್ಟಿಮನಿ, ವಾಯ್.ಡಿ.ಆಲೂರ, ಹುಲ್ಲನಗೌಡ ಗೌಡರ, ಪಾರ್ವತಿ ಹುಗ್ಗಿ, ಶ್ಯಾಮಲಾ ಹಳ್ಳೂರ, ದ್ರಾಕ್ಷಾಯಣಿ ಮಂಕಣಿ, ಚಂದ್ರಬಾಗ ಮಾಂಡ್ರೆ, ಶಶಿಕಲಾ ಜೋಳದ, ಶಂಕ್ರವ್ವ ಕುಂಬಾರ, ಸೇರಿದಂತೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು
ವರದಿ ಶಂಕರ್ ವನಕಿ ಬಾಗಲಕೋಟೆ