ಬಾಗಲಕೋಟ ಜಿಲ್ಲಾ ಸವಿತಾ ಸಮಾಜ ನೌಕರರ ಹಾಗೂ ವೃತ್ತಿಯೇತರರ ಕ್ಷೇಮಾಭಿವೃದ್ಧಿ ಸಂಘ (ರಿ), ಬಾಗಲಕೋಟೆ
ದಿನಾಂಕ : 24.09.2024 ರಂದು ಬಾಗಲಕೋಟ ಜಿಲ್ಲಾ ಸವಿತಾ ಸಮಾಜ ನೌಕರರ ಹಾಗೂ ವೃತ್ತಿಯೇತರ ಕ್ಷೇಮಾಭಿವೃದ್ಧಿ ಸಂಘ (ರಿ), ಬಾಗಲಕೋಟೆ ಇದರ ಉದ್ಘಾಟನೆಯು ನವನಗರದ ಸೆಕ್ಟರ ನಂ.52 ರಲ್ಲಿ ಇರುವ ಶ್ರೀ ವಿರಭದ್ರೇಶ್ವರ ಭವನದಲ್ಲಿ ಅದ್ಧೂರಿಯಾಗಿ ನೆರವೇರಿತು. ಸಂಘದ ಉದ್ಘಾಟನೆಯನ್ನು ಶ್ರೀ ಹೆಚ್.ವಾಯ್. ಮೇಟಿ ಶಾಸಕರು ಬಾಗಲಕೋಟ ರವರು ಉದ್ಘಾಟಿಸಿ ಮಾತನಾಡಿದರು.
ಅದರಂತೆ ಉದ್ಘಾಟನೆಗೆ ಸಮಾಜದ ಗುರು-ಹಿರಿಯರು ಮತ್ತು ಎಲ್ಲ ಕುಲಬಾಂಧವರು ಆಗಮಿಸಿದ್ದರು ಮತ್ತು ಶ್ರೀ ರಾಮಣ್ಣ ಕಾ. ಗೋಗಿ ರವರು ಉದ್ಘಾಟನೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಸಂಘದ ಎಲ್ಲ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.
ವರದಿ ರಾಜೀವ್ ಸುಂಕದ ಬಾಗಲಕೋಟೆ