ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡುವುದು ಅವಶ್ಯಕ

 


ಪ್ರತಿಯೊಬ್ಬರು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವದು ಅವಶ್ಯಕವಾಗಿದೆ ಎಂದು ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಮ ನಿ ಪ್ರ ಹುಚ್ಚೇಶ್ವರ ಮಹಾಸ್ವಾಮಿಗಳು ತಿಳಿಸಿದರು 

ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣಾ ಮತದಾರರ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಪ್ರಜಾಪ್ರಭುತ್ವದ ಗೋಡೆಯನ್ನು ಉದ್ಘಾಟಿಸಿ ಬಾವಿ ಮತದಾರರಾಗಲಿರುವ ಎಲ್ಲ ವಿದ್ಯಾರ್ಥಿಗಳು ತಮ್ಮ ಮನೆಯವರಿಗೆ ಮತ್ತು ಸುತ್ತಮುತ್ತಲಿನ ಎಲ್ಲಾ ಪ್ರಜೆಗಳಿಗೆ ಚುನಾವಣೆಯ ಸಂದರ್ಭದಲ್ಲಿ ತಪ್ಪದೇ ಮತದಾನ ಮಾಡಲು ತಿಳಿಸಬೇಕೆಂದು ಹೇಳಿದರು 



ಈ ಕಾರ್ಯಕ್ರಮದಲ್ಲಿ ಕಮತಗಿಯ ಹಿರೇಮಠದ ಶಿವಕುಮಾರ್ ಮಹಾಸ್ವಾಮಿಗಳು ಪ್ರಜಾಪ್ರಭುತ್ವದ ಗೋಡೆಯ ಭಾವಚಿತ್ರಗಳನ್ನು ವೀಕ್ಷಿಸಿದರು

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಶ್ರೀ ಎಸ್ ವಿ ಬಾಗೇವಾಡಿ ಅವರು ಮಾತನಾಡಿ ಇಂದು ಮತದಾನ ಶೇಕಡಾ ನೂರರಷ್ಟು ಆಗಬೇಕೆಂದರೆ ಎಲ್ಲರೂ ಮತದಾನ ಮಾಡಿ ನನ್ನ ಮತ ನನ್ನ ಹಕ್ಕು ಎಂದು ತಿಳಿದು ಕೊಂಡಾಗ ಗುರಿಯನ್ನು ಸಾಧಿಸಬಹುದು ಎಂದರು ಕಾರ್ಯಕ್ರಮದಲ್ಲಿ ಚುನಾವಣಾ ಮತದಾರರ ಸಾಕ್ಷರತಾ ಕ್ಲಬ್ಬಿನ ನೋಡಲ್ ಅಧಿಕಾರಿಗಳಾದ ಶ್ರೀ ಬಿ ವಿ ಬೀರಕಬ್ಬಿ ಎಸ್ ಕೆ ಮುತ್ತಲಗೇರಿ ಎನ್ ಪಿ ಹೊಲಮನಿ ಗೌಡ್ರ ಸಿ ಎಸ್ ಭಾಪ್ರಿ ಉಪಸ್ಥಿತರಿದ್ದರು


ವರದಿ ಶಂಕರ್ ವನಕಿ ಕಮತಗಿ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!