ಬೆಳಗಾವಿ ರಾಯಚೂರು SH 20 ರಲ್ಲಿ ಅಪಘಾತ ; ಇಬ್ಬರ ಸಾವು

 

ಕಮತಗಿ :-  ಬಾಗಲಕೋಟೆ ಜಿಲ್ಲೆಯ ಕಮತಗಿ ಕ್ರಾಸ್ ಹತ್ತಿರ ಬೆಳಗಾವಿ ರಾಯಚೂರು ರಾಜ್ಯ ಹೆದ್ದಾರಿ 20 ರಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕ್ಟರವೂಂದಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಕಮತಗಿ ಕ್ರಾಸ್ ಬಳಿ ಶುಕ್ರವಾರ ರಾತ್ರಿ 7.30 ರ ಆಸು ಪಾಸಿನಲ್ಲಿ ಸಂಭವಿಸಿದೆ.

ಇಳಕಲ್ಲ ಮೂಲದ ಅಮರೇಶ ಬೇನಕನಾಳಮಠ (24), ಶರಣಯ್ಯ ಬೆಳಕನಾಳಮಠ (17) ಮೃತ ಪಟ್ಟ ಸಹೋದರರು ಎಂದು ತಿಳಿದಯ ಬಂದಿದೆ.

ಬೈಕ್ ಮೇಲೆ ತೆರಳುತ್ತಿದ್ದ ಇಬ್ಬರು ರಸ್ತೆಯ ಮೇಲೆ ನಿಂತಿದ್ದ ಟ್ಯಾಂಕ್ಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ 

ಬೆಳಕು ಹರಿದರೆ ಮನೆಯಲ್ಲಿ ಗಣೇಶ ಚತುರ್ಥಿಯ ಸಂತಸದಲ್ಲಿ ಇರಬೇಕಾದ ಮನೆಯಲ್ಲಿ ಈಗ ಶೋಕ ಆವರಿಸಿದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ 

ಸುದ್ದಿ ತಿಳಿದು ತಕ್ಷಣ ಅಮೀನಗಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.



ಬ್ಯೂರೋ ರಿಪೋರ್ಟ್  ಶಂಕರ್ ವನಕಿ 

ಖಡಕ್ ಕನ್ನಡ Digital ನ್ಯೂಸ್ ಕಮತಗಿ ಬಾಗಲಕೋಟೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!