ಬಾಗಲಕೋಟೆ ಜಿಲ್ಲೆ ಕಮತಗಿ ಪಟ್ಟಣದ ಶ್ರೀ ದೇವಾಂಗ ಸಮಾಜ ಅಭಿವೃದ್ಧಿ ಸಮಿತಿ(ರಿ) ಹಾಗೂ ಶ್ರೀ ಬನಶಂಕರಿ ಯುವ ಸೇವಾ ಸಮಿತಿ, ಮತ್ತು ಬನಶಂಕರಿ ಮಹಿಳಾ ಸೇವಾ ಸಮಿತಿ ವತಿಯಿಂದ
ದಸರಾ ಮಹೋತ್ಸವ 2024 ರ ಅಂಗವಾಗಿ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವು ಶ್ರೀ ಬನಶಂಕರಿ ಸಾಂಸ್ಕೃತಿಕ ಭವನಲ್ಲಿ ವಿಜಯದಶಮಿ ದಿನದಂದು ನಡೆಯಿತು
ಶ್ರೀ ಬನಶಂಕರಿದೇವಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರಸ್ವಾಮಿ ದೇವಾಂಗಮಠ ಘನ ಉಪಸ್ಥಿತಿಯನ್ನು ಹಾಗೂ ಉಪಸ್ಥಿತಿಯನ್ನು ಮುಸಂಗಸ್ವಾಮಿ ದೇವಾಂಗಮಠ ವಹಿಸಿದರು
ಶ್ರೀ ದೇವಾಂಗ ಸಮಾಜ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಹೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಕಮತಗಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ರಮೇಶ್ ಜಮಖಂಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು
ಪಟ್ಟಣ ಪಂಚಾಯತ ಸದಸ್ಯರಾದ ದೇವಿ ಪ್ರಸಾದ ನಿಂಬಲಗುಂದಿ, ಪ್ರಕಾಶ ಶಿನ್ನೂರ, ಬಸವರಾಜ ಕುಂಬಳಾವತಿ, ಬಸವರಾಜ ದಂಡಾವತಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ಸದಸ್ಯರಾದ ಗೋಪಾಲಪ್ಪ ವನಕಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು
ದೇವಾಂಗ ಸಮಾಜದ ಕಮತಗಿ ಪಟ್ಟಣದ ಹೆಣ್ಣು ಮಕ್ಕಳಾದ ಕೆರೂರ ಪಟ್ಟಣ ಪಂಚಾಯತ ಅಧ್ಯಕ್ಷೆಯಾದ ಶ್ರೀಮತಿ ನಿರ್ಮಲ ಸದಾನಂದ ಮದಿ ಗುಳೇದಗುಡ್ಡ ಪುರಸಭೆಯ ಅಧ್ಯಕ್ಷೆ ಶ್ರೀಮತಿ ಜ್ಯೋತಿ ರಾಘವೇಂದ್ರ ಗೋವನಕೊಪ್ಪ ಗಜೇಂದ್ರಗಡ ಪುರಸಭೆಯ ಉಪಾಧ್ಯಕ್ಷೆ ಶ್ರೀಮತಿ ಸವಿತಾ ಶ್ರೀಧರ ಬಿದರಳ್ಳಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಸನ್ಮಾನ ಸ್ವೀಕರಿಸಿದರು
ಇದೇ ಸಂದರ್ಭದಲ್ಲಿ 2023/24 ನೇ ಸಾಲಿನಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಎಸ್ ಎಸ್ ಎಲ್ ಸಿ. ವಿದ್ಯಾರ್ಥಿಗಳಿಗೆ 1000 ರೂ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 1500 ರೂ ಪ್ರೋತ್ಸಾಹ ಧನ ನೀಡಿ ಪ್ರತಿಭಾ ಪುರಸ್ಕಾರ ಮಾಡಲಾಯಿತು
ಬಾಗಲಕೋಟೆ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಶಕ್ತಿಶಂಕರ್ ಬಿಜಾಪುರ ಅಂತಾರಾಷ್ಟ್ರೀಯ ದೇವಾಂಗ ಸಂಘದ ಆರ್ಥಿಕ ಸಲಹೆಗಾರರು ಹಾಗೂ ಲೆಕ್ಕ ಪರಿಶೋಧಕರಾದ ನಾರಾಯಣ ಹುಲಮನಿಗೌಡ್ರ ಹಾಗೂ ಶಿಕ್ಷಕ ವೃತ್ತಿಯಿಂದ ಸಿ ಆರ್ ಸಿ ಯಾಗಿ ನಿಯುಕ್ತಿಗೊಂಡ ಮುತ್ತು ಬಳ್ಳಾ, ರಾಘವೇಂದ್ರ ವಂದಗನೂರ ನವರಾತ್ರಿಯ 10 ದಿನ ಶ್ರೀ ಬನಶಂಕರಿ ದೇವಿಗೆ ವಿಶೇಷ ಅಲಂಕಾರ ಮಾಡಿಸಿದ ಮಹನೀಯರಿಗೆ ಸನ್ಮಾನಿಸಲಾಯಿತು
ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಈರಣ್ಣ ಯರಗಲ್ಲ ವೀರಭದ್ರಪ್ಪ ಆರಿ, ಪ್ರಭಾಕರ ಗಾಡದ, ಶ್ರೀಕಾಂತ್ ಧೂಪದ ಟಾಕಪ್ಪ ಗಾಡದ ಶ್ರೀ ಬನಶಂಕರಿ ಪೂರ್ವ ಪ್ರಾಥಮಿಕ ಶಾಲೆಯ ಸಿಬ್ಬಂದಿ ವರ್ಗ ಶ್ರೀ ಶಾಖಾಂಬರಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ವರ್ಗ ಶ್ರೀ ದೇವಲ ಮಹರ್ಷಿ ಕೈಮಗ್ಗ ನೇಕಾರರ ಸಹಕಾರ ಸಂಘದ ಆಡಳಿತ ಮಂಡಳಿ ಸೇರಿದಂತೆ ಪಟ್ಟಣದ ಪ್ರಮುಖರು ಹಾಜರಿದ್ದರು
ವರದಿ ಶಂಕರ್ ವನಕಿ ಕಮತಗಿ