ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಆಶ್ರಯದಲ್ಲಿ ಗಾಂಧಿಜಿ ಜಯಂತಿ ಹಾಗೂ ಲಾಲಬಹದ್ದೂರ ಶಾಸ್ತ್ರೀಯವರ ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತದ ಮುಖ್ಯದ್ವಾರದಲ್ಲಿ ಇಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸದ ಪಿ ಸಿ ಗದ್ದಿಗೌಡರ್ ಜನಪ್ರಿಯ ಶಾಸಕ ಎಚ್ ವೈ ಮೇಟಿ ವಿಧಾನ ಪರಿಷತ್ ಸದಸ್ಯ ಪಿಎಚ್ ಪೂಜಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು
ರಾಷ್ಟ್ರಪಿತ ಮಹಾತ್ಮ ಗಾಂಧಿ & ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ನಿಮಿತ್ಯ ಇಂದು ಭಾಜಪಾ ಕಾರ್ಯಾಲಯ ಶಿವಾನಂದ ಜಿನ್ ನಲ್ಲಿ ಜಯಂತಿ ಕಾರ್ಯಕ್ರಮ ನಡೆಯಿತು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಾಕ್ಟರ್ ವೀರಣ್ಣ ಚರಂತಿಮಠ , ರಾಜ್ಯಸಭಾ ಸದಸ್ಯರಾದ ನಾರಾಯಣ ಸಾ K ಭಾಂದಗೆ , ಬೆಳಗಾವಿ ವಿಭಾಗ ಸಹ ಪ್ರಭಾರಿ ಬಸವರಾಜ್ ಯಂಕಂಚಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕಕ್ , ನಗರಸಭಾ ಅಧ್ಯಕ್ಷೆ ಸವಿತಾ ಲೆಂಕೆನವರ್ , ನಗರಸಭಾ ಉಪಾಧ್ಯಕ್ಷೆ ಶೋಭಾ ರಾವ್ , ನಗರ ಮಂಡಲ ಅಧ್ಯಕ್ಷ ಬಸವರಾಜ್ ಹುನುಗುಂದ , ಭಾಜಪಾ ಮುಖಂಡರಾದ ರಾಜು ರೇವಡ್ಕರ್ , ಲಕ್ಷ್ಮೀನಾರಾಯಣ ಕಾಸಟ , ಡಾ. ಎಂ.ಎಸ್. ದಡ್ಡೇನವರ , ಗುಂಡೂರಾವ್ ಶಿಂಧೆ , ನಗರಸಭಾ ಸದಸ್ಯರು & ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ ರಾಜೀವ್ ಸುಂಕದ ಬಾಗಲಕೋಟೆ