ಮಾಡು ಇಲ್ಲವೆ ಮಡಿ ಎಂಬ ಮೇರು ಸಂದೇಶ ನೀಡಿದ ವಿಶ್ವಮೆಚ್ಚಿದ ಮಹಾತ್ಮನ ಸ್ಮರಣೆ ನಿಮಿತ್ಯ
ಇಂದು ಮಹಾತ್ಮ ಗಾಂಧೀಜಿ ಜಯಂತಿಯನ್ನು ಈ ಬಾರಿ ವಿಶಿಷ್ಠವಾಗಿ ಆಚರಿಸಲು ಕೆಪಿಸಿಸಿ ಸೂಚನೆ ನೀಡಿದನ್ವಯ ಬಾದಾಮಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜನಪ್ರಿಯ ಶಾಸಕರಾದ ಭೀಮಸೇನ ಬಿ ಚಿಮ್ಮನಕಟ್ಟಿಯವರ ಅಧ್ಯಕ್ಷತೆಯಲ್ಲಿ
ಗಾಂಧಿ ನಡಿಗೆಯನ್ನು ಬಾದಾಮಿಯ ಬಸವೇಶ್ವರ ಸರ್ಕಲ್ ನಿಂದ ಅಕ್ಕಮಹಾದೇವಿ ಕಲ್ಯಾಣ ಮಂಟಪದ ವರೆಗೆ ಪಾದಯಾತ್ರೆ ಜರುಗಿತು ಪಾದಯಾತ್ರೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರ ಜೊತೆಗೆ ಹೆಜ್ಜೆ ಹಾಕಿ ವಿಶಿಷ್ಟ ಆಚರಣೆಯಲ್ಲಿ ಭಾಗವಹಿಸಿ ಸಭಾಂಗಣದಲ್ಲಿ ಜರುಗಿದ ಮಹಾತ್ಮ ಗಾಂಧೀಜಿ ಅವರ ಹಾಗೂ ಮಾಜಿ ಪ್ರಧಾನಿ ದಿ|| ಲಾಲ ಬಹಾದ್ದೂರ ಶಾಸ್ತ್ರಿ ಉಭಯತರ ಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳಲಾಯಿತು. ಹಾಗೂ ಸಭಾಂಗಣದಲ್ಲಿ ಸ್ಕ್ರೀನ್ ಮುಕಾಂತರ ಕೆಪಿಸಿಸಿ ಇಂದ ಆಯೋಜಿಸಿದ್ದ ನೇರ ವಿಡಿಯೋ ಸಂವಾದವನ್ನು ಜನರು ವೀಕ್ಷಿಭಸಿದರು.
ವರದಿ ಸಂತೋಷ್ ಕಲಾಲಬಂಡಿ ಗುಳೇದಗುಡ್ಡ