ಅಧ್ಯಕ್ಷರಿಗೆ ಗೌರವ ಸನ್ಮಾನ

 ಶ್ರೀ ಗಾಯತ್ರಿ ಪತ್ತಿನ ಸಹಕಾರಿ ಸಂಘ ನಿ ಸೂಳೇಭಾವಿಯ ಕೇಂದ್ರ ಕಛೇರಿಯಲ್ಲಿ 



 ಕಮತಗಿ ಪಟ್ಟಣ ಪಂಚಾಯತ ಅಧ್ಯಕ್ಷರಾಗಿ,ಆಯ್ಕೆಯಾದ ಬಸವರಾಜ ಪುಂಡಲಿಕಪ್ಪ ಕುಂಬಳಾವತಿ ಹಾಗೂ

 


ಶ್ರೀ ಅನ್ನಪೂರ್ಣೇಶ್ವರಿ ಪತ್ತಿನ ಸಹಕಾರಿ 
ಸಂಘ ನಿ, ಕಮತಗಿ ಇದರ ಮುಂದಿನ ಐದು ವರ್ಷದ ಅವಧಿಗೆ 2 ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ, ವೀರಭದ್ರಪ್ಪ ಆರಿ ಅವರನ್ನು 

ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘ  ಬೆಂಗಳೂರು ಇದರ  ಅಧ್ಯಕ್ಷರಾದ ರವೀಂದ್ರ ಪಿ ಕಲಬುರ್ಗಿ ಅವರ ನೇತೃತ್ವದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗೋಪಾಲಪ್ಪ ವನಕಿ,  ಗದಗಯ್ಯ ನಂಜಯ್ಯನಮಠ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಸೂಳೇಭಾವಿ, ನಿರ್ದೇಶಕ ಶ್ರೀಕಾಂತ ಧೂಪದ , ಸಂಗಮೇಶ ಬಂಡೆಪ್ಪನವರ, ಮೈನಪ್ಪ ಸಿಂಗಾಡಿ  ಗಾಯತ್ರಿ ಪತ್ತಿನ ಸಹಕಾರ ಸಂಘದ ಪ್ರದಾನ ವ್ಯವಸ್ಥಾಪಕ ಹೇಮಂತ ದುತ್ತರಗಿ ,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು