ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಿದ್ದನಕೊಳ್ಳ ಮಠಕ್ಕೆ ಭೇಟಿ

 

ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ, ನಿತ್ಯ ನಿರಂತರ ದಾಸೋಹ ಮಠ ಎಂದೇ ಹೆಸರುವಾಸಿಯಾಗಿರುವ ಇಳಕಲ್ಲ ತಾಲೂಕಿನ ಧಾರ್ಮಿಕ ಕ್ಷೇತ್ರ ಸಿದ್ದನಕೊಳ್ಳ ಮಠಕ್ಕೆ ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಭೇಟಿ ನೀಡಿದರು

ನಂತರ ಸಿದ್ದನಕೊಳ್ಳ ಮಠದ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿಯವರ ಗದ್ದುಗೆಯ ದರ್ಶನ ಪಡೆದು, ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಸಿದ್ದನಕೊಳ್ಳ ಮಠವು ಕಲಾ ಪೋಷಿತ ಮಠವೆಂದು ನಾಡಿನ ತುಂಬೆಲ್ಲ ಸುದ್ದಿ ಮಾಡಿದೆ ದ ರಾ ಬೇಂದ್ರೆ ನಟಸಾರ್ವಭೌಮ ಡಾ. ರಾಜಕುಮಾರ್ ಹಾಗೂ ನಟರು ಸಾಹಿತಿಗಳು ಈ ಮಠದ ನಂಟು ಹೊಂದಿದ್ದಾರೆ 

ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಿದ್ದನಕೊಳ್ಳಕ್ಕೆ ಭೇಟಿ ಮಾಡಿದ ನಂತರ ಸಂಸದರಾಗಿ, ಕೇಂದ್ರ ಸಚಿವರಾಗಿದ್ದಾರೆ 

       ಶ್ರಾವಣ ಮಾಸದ ಕೊನೆಯ ಸೋಮವಾರ ಅಮಾವಾಸ್ಯೆ ದಿನದಂದೇ ಮಾಜಿ ಸಂಸದ ನಳಿನಕುಮಾರ ಕಟೀಲ್ ಅವರು ಸುಕ್ಷೇತ್ರ ಸಿದ್ದನಕೊಳ್ಳಕ್ಕೆ ಭೇಟಿ ನೀಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.


ವರದಿ ಶಂಕರ್ ವನಕಿ ಕಮತಗಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!