೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು
ಇದೇ ಅಕ್ಟೋಬರ್ ೭ ರಂದು ಹುನಗುಂದ ತಾಲೂಕಿನಲ್ಲಿ ಸಂಚರಿಸಲಿದ್ದು, ಸದರಿ ಜ್ಯೋತಿ ರಥಯಾತ್ರೆಯ ಸ್ವಾಗತ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮಠಾಧೀಶರು, ಪಟ್ಟಣ ಪಂಚಾಯತ ಪುರಸಭೆ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಧ್ಯಕ್ಷ, ಹಾಗೂ ಸದಸ್ಯರು, ಕನ್ನಡ ಪರಸಂಘಟನೆಗಳು, ಸಾಹಿತಿಗಳು,ಲೇಖಕರು, ಪತ್ರಕರ್ತರು, ಉಪನ್ಯಾಸಕರು, ಶಿಕ್ಷಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು,ಕ.ಸಾ.ಪ ಆಜೀವ ಸದಸ್ಯರು, ಕಲಾವಿದರು, ವಿವಿಧ ಸಂಘಟನೆಗಳ ಪ್ರಮುಖರು, ಎಲ್ಲಾ ಇಲಾಖೆಯ ಅಧಿಕಾರಿಗಳು, ನೌಕರರು ಭಾಗಿಯಾಗಿ* ರಥಯಾತ್ರೆ ಸ್ವಾಗತ ಸಮಾರಂಭ ಯಶಸ್ವಿಯಾಗಿಸಲು ವಿನಂತಿ
ಅವಳಿ ತಾಲೂಕಿನಲ್ಲಿ ರಥ ಯಾತ್ರೆ
ರಾಮಥಾಳ( ಕಮತಗಿ ಕ್ರಾಸ್) - ಕಳ್ಳಿಗುಡ್ಡ - ಐಹೊಳೆ- ಕೆಲೂರು- ಗುಡೂರು- ಇಳಕಲ್ - ಹುನಗುಂದ- ಕೂಡಲಸಂಗಮ- ಧನ್ನೂರು ಮಾರ್ಗದಲ್ಲಿ ಮೆರವಣಿಗೆ ನಡೆಯಲಿದೆ ಎಂದು ಹುನಗುಂದ ತಾಲ್ಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಹೇಳಿದ್ದಾರೆ
ವರದಿ - ಶಂಕರ್ ವನಕಿ ಕಮತಗಿ